ತನ್ವಿ ಫ಼ಿಲಂಸ್ ಲಾಂಛನದಲ್ಲಿ ಸಿ.ಆರ್.ಮನೋಹರ್ ನಿರ್ಮಿಸುತ್ತಿರುವ, ಉಪೇಂದ್ರ ಅವರು ನಾಯಕರಾಗಿ ಆಭಿನಯಿಸುತ್ತಿರುವ ಚಿಹ್ನೆಯ ಶೀರ್ಷಿಕೆಯುಳ್ಳ ಚಿತ್ರಕ್ಕೆ ಬಾಲಾಜಿ ಡಿಜಿಟಲ್ ಸ್ಟುಡಿಯೋದಲ್ಲಿ ಡಬ್ಬಿಂಗ್ ಪೂರ್ಣವಾಗಿದೆ. ಉಪೇಂದ್ರ ಒಂದೇ ದಿನದಲ್ಲಿ ಡಬ್ಬಿಂಗ್ ಮುಗಿಸಿರುವುದು ವಿಶೇಷ.
ಶ್ರೀನಿವಾಸರಾಜು ಕಥೆ, ಚಿತ್ರಕಥೆ ಬರೆದು ನಿರ್ದೇಶಿಸುತ್ತಿರುವ ಅದ್ದೂರಿ ತಾರಾಗಣದ ಹಾಗೂ ಅಪಾರವೆಚ್ಚದ ಈ ಚಿತ್ರಕ್ಕೆ ನೂರು ದಿನಗಳ ಕಾಲ ಟರ್ಕಿ, ಬ್ಯಾಂಕಾಕ್, ತಂಜಾವೂರು, ಚೆನ್ನೈ, ಮೈಸೂರು, ಮೇಲುಕೋಟೆ ಹಾಗೂ ಬೆಂಗಳೂರಿನಲ್ಲಿ ಚಿತ್ರೀಕರಣ ನಡೆದಿದೆ.
ಮಣಿಶರ್ಮರ ಸಂಗೀತ ನಿರ್ದೇಶನವಿರುವ ಈ ಚಿತ್ರಕ್ಕೆ ವೆಂಕಟ್ಪ್ರಸಾದ್ ಅವರ ಛಾಯಾಗ್ರಹಣವಿದೆ. ಕಣ್ಣನ್ ಕಣ್ಣನ್ ಸಾಹಸ ನಿರ್ದೇಶನ, ವಿಜಯ್, ಶಿವಶಂಕರ್, ಪ್ರದೀಪ್ ಅಂತೋಣಿ ಹಾಗೂ ರಘು ನೃತ್ಯ ನಿರ್ದೇಶನ, ಮೋಹನ್.ಬಿ.ಕೆರೆ ಕಲಾ ನಿರ್ದೇಶನವಿರುವ ಈ ಚಿತ್ರದ ಹಾಡುಗಳನ್ನು ಕೆ.ಕಲ್ಯಾಣ್ ಹಾಗೂ ಡಾ:ನಾಗೇಂದ್ರಪ್ರಸಾದ್ ರಚಿಸಿದ್ದಾರೆ. ಸಂಭಾಷಣೆಯನ್ನು ಗುರುರಾಜ್.ಎಂ.ದೇಸಾಯಿ ಬರೆದಿದ್ದಾರೆ. ಉಪೇಂದ್ರ, ರಾಗಿಣಿ, ಸಲೋನಿ, ಶ್ರೀನಿವಾಸಮೂರ್ತಿ, ಗೀತಾ, ದೊಡ್ಡಣ್ಣ, ಸಿ.ಆರ್.ಗೋಪಿ, ಶಿವರಾಂ, ರವಿಶಂಕರ್, ಮಕರಂದ್ ದೇಶಪಾಂಡೆ, ಲಕ್ಷ್ಮಣ್, ಶರತ್ ಲೋಹಿತಾಶ್ವ, ಮುನಿ, ಕಿಟ್ಟಿ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.